main logo

ಸ್ನೇಹಿತನನ್ನು ರಕ್ಷಿಸಿ ಸಮುದ್ರದಲೆಯಲ್ಲಿ ಕೊಚ್ಚಿಹೋದ ಯುವಕ!

ಸ್ನೇಹಿತನನ್ನು ರಕ್ಷಿಸಿ ಸಮುದ್ರದಲೆಯಲ್ಲಿ ಕೊಚ್ಚಿಹೋದ ಯುವಕ!

ಮಂಗಳೂರು: ಮಲ್ಲಮಾರ್ ಬೀಚ್‌ ನಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರಲ್ಲಿ ಇಬ್ಬರನ್ನು ರಕ್ಷಿಸಲಾಗಿರುವ ಮತ್ತು ಇನ್ನೊಬ್ಬ ಯುವಕ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಪಾಲಾಗಿರುವ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಬಾಗಲಕೋಟೆ ಮೂಲದ ಮಂತೇಶ್ (29) ಎಂದು ಗುರುತಿಸಲಾಗಿದೆ.

ಮಾಂತೇಶ ತನ್ನ ಸ್ನೇಹಿತರೊಂದಿಗೆ ಬೀಚ್‌ಗೆ ಬಂದಿದ್ದು. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಸ್ನೇಹಿತನನ್ನು ರಕ್ಷಿಸಿ ಆತನನ್ನು ದಡಕ್ಕೆ ಎಳೆದು ತರುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಅಲೆ ಬಂದು ಮಾಂತೇಶ್ ಅವರಿಗೆ ಅಪ್ಪಳಿಸಿದೆ. ಅಲೆಯ ಹೊಡೆತಕ್ಕೆ ಸಿಲುಕಿ ಮಾಂತೇಶ್ ಅವರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

ಉಳಿದಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.  ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!
ನ್ಯೂಸ್‌ರೂಮ್‌ ವಾಟ್ಸ್ಅಪ್ ಗ್ರೂಪ್ ಗೆ ಸೇರಿ