main logo

ಪುತ್ತೂರು ಶಾಸಕರ ದುಬೈ ಪ್ರವಾಸ – ಊರಿನವರನ್ನು ಭೇಟಿಯಾದ ಅಶೋಕ್ ರೈ

ಪುತ್ತೂರು ಶಾಸಕರ ದುಬೈ ಪ್ರವಾಸ – ಊರಿನವರನ್ನು ಭೇಟಿಯಾದ ಅಶೋಕ್ ರೈ

ದುಬೈ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ದುಬೈಗೆ ಭೇಟಿ ನೀಡಿದ್ದು, ಈ ಸಂದರ್ಭ ಅಲ್ಲಿರುವ ಪುತ್ತೂರಿನವರನ್ನು ಭೇಟಿಯಾದರು.

ದುಬೈಯಲ್ಲಿ ನೆಲೆಸಿರುವ ಪುತ್ತೂರಿಗರು ಇಲ್ಲಿನ ಜುಮೈರಾ ತಾಜ್ ಹೊಟೇಲಿನಲ್ಲಿ ಶಾಸಕರಿಗೆ ಆತ್ಮೀಯ ಸ್ವಾಗತ ನೀಡಿ ಅವರನ್ನು ಅಭಿನಂದಿಸಿದರು.

ಬಳಿಕ ನಡೆದ ಸೌಹಾರ್ದ ಭೇಟಿ ಕೂಟದಲ್ಲಿ ಮಾತನಾಡಿದ ಅಶೋಕ್ ರೈ, ‘ಚುನಾವಣೆಯ ಸಂದರ್ಭ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಧನ್ಯವಾದ ಹೇಳಿದರಲ್ಲದೆ, ದುಬೈನಲ್ಲಿ ನೆಲೆಸಿರುವ ನಮ್ಮೂರಿನ ಯುವಕರ ಸಹಕಾರ ಅವಿಸ್ಮರಣೀಯ. ನಮ್ಮೂರಿನ ಜನಪರ ಕೆಲಸಗಳಿಗೆ ನಿಮ್ಮೆಲ್ಲರ ಬೆಂಬಲ ಸದಾ ಇರಲಿ..’ ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮುಸ್ತಾಫಾ ಕೋಡಿಂಬಾಡಿ, ಖಲೀಲ್ ಬಿ.ಎಚ್., ಅಜಿತ್ ಕೋಡಿಂಬಾಡಿ, ಅನ್ಸಾರ್ ಬಿ.ಎಚ್., ಸಿನಾನ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!