main logo

ಕೊಕ್ಕಡ: ಕೋಪ ನೆತ್ತಿಗೇರಿ ರಪ್ ..ರಪ್ಪನೇ ಬಾರಿಸಿದ ಪಶು ವೈದ್ಯ, ನೆಲಕ್ಕೆ ಬಿದ್ದು ಪ್ರಾಣ ಚೆಲ್ಲಿದ ವ್ಯಕ್ತಿ

ಕೊಕ್ಕಡ: ಕೋಪ ನೆತ್ತಿಗೇರಿ ರಪ್ ..ರಪ್ಪನೇ ಬಾರಿಸಿದ ಪಶು ವೈದ್ಯ, ನೆಲಕ್ಕೆ ಬಿದ್ದು ಪ್ರಾಣ ಚೆಲ್ಲಿದ ವ್ಯಕ್ತಿ

 ಕೊಕ್ಕಡದ ಪಶು ವೈದ್ಯನೊಬ್ಬ ಕೋಪ ನೆತ್ತಿಗೇರಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದರ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ ಅನ್ನುವ ದೂರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದುರ್ಘಟನೆಯಲ್ಲಿ ಕೃಷ್ಣಪ್ಪ ಅನ್ನುವವರು ಸಾವಿಗೀಡಾಗಿದ್ದಾರೆ.
ಕೃಷ್ಣಪ್ಪ ಅನ್ನುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು 13-05-2024 ರಂದು ಕೊಕ್ಕಡಕ್ಕೆ ವಾಪಸ್ ಬಂದಿದ್ದಾರೆ. ಅದೇ ದಿನ ರಾತ್ರಿ ಕೃಷ್ಣಪ್ಪ ಕೊಕ್ಕಡದ ಜಂಕ್ಷನ್ ಬಳಿ ನಿಂತಿದ್ದಾಗ ಸ್ಥಳೀಯ ಪಶು ವೈದ್ಯ ಕುಮಾರ್ ಎಂಬುವವರು ಬಂದಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಕುಮಾರ್ ಕೃಷ್ಣಪ್ಪರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಕೆಳಕ್ಕೆ ಬಿದ್ದ ಕೃಷ್ಣಪ್ಪನವರು ಸಾವಿಗೀಡಾಗಿದ್ದಾರೆಂದು ಅವರ ಪತ್ನಿ ಪಟ್ರಮೆ ಗ್ರಾಮ ಬೆಳ್ತಂಗಡಿ ನಿವಾಸಿ ಭಾರತಿ (46 ವರ್ಷ) ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2024 ಕಲಂ: .302 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!