main logo

ಅಯೋಧ್ಯೆಯ ಗರ್ಭ ಗುಡಿಯಲ್ಲಿ ರಾಮ ಲಲ್ಲಾ ವಿರಾಜಮಾನಕ್ಕೆ ಕಾಯ್ತಿದ್ದಾರೆ ‘ಮೌನಿ ಬಾಬಾ’!

ಅಯೋಧ್ಯೆಯ ಗರ್ಭ ಗುಡಿಯಲ್ಲಿ ರಾಮ ಲಲ್ಲಾ ವಿರಾಜಮಾನಕ್ಕೆ ಕಾಯ್ತಿದ್ದಾರೆ ‘ಮೌನಿ ಬಾಬಾ’!

ಭೋಪಾಲ್(ಜ.13): : 10 ನೇ ವಯಸ್ಸಿನಲ್ಲಿ ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ತೆಗೆದುಕೊಂಡ ಮೌನಿ ಬಾಬಾ, ರಾಮಮಂದಿರವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ವರ್ಷಗಳಿಂದ ಬರಿಗಾಲಿನಲ್ಲಿ ನಡೆಯುತ್ತಿದ್ದಾರೆ, ಶೀಘ್ರದಲ್ಲೇ ಅವರು ತಮ್ಮ ಮೌನವನ್ನು ಮುರಿಯಲಿದ್ದಾರೆ. ಹೌದು ಜನವರಿ 22 ರಂದು ಭಗವಾನ್ ರಾಮನ ನಾಮವನ್ನು ಜಪಿಸುವ ಮೂಲಕ ಅವರು ಇಷ್ಟು ವರ್ಷದಿಂದ ಪಾಲಿಸಿಕೊಂಡು ಬಂದಂತಹ ಮೌನ ಮುರಿಯಲಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ರಾಮಲಲ್ಲಾ ಸ್ಥಾಪನೆಯಾಗುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಮಧ್ಯಪ್ರದೇಶದ ಈ ಮೌನಿ ಮೋನಿ ಬಾಬಾ ನಿರ್ಧರಿಸಿದ್ದರು. ಆದರೆ ರಾಮಲಲ್ಲಾ ದೇವಸ್ಥಾನದಲ್ಲಿ ಕುಳಿತ ಕೂಡಲೇ ಚಪ್ಪಲಿ ಹಾಕುವುದಿಲ್ಲ, ಮಾತನಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕೈಬಿಡುತ್ತಾರೆ ಎನ್ನಲಾಗಿದೆ.

10ನೇ ವಯಸ್ಸಿನಿಂದಲೂ ಮೌನಿಯಾಗಿದ್ದ ಅವರನ್ನು ನಗರದ ನಿವಾಸಿಗಳು ‘ಮೌನಿ ಬಾಬಾ’ ಎಂದು ಕರೆಯಲಾರಂಭಿಸಿದ್ದಾರೆ. ಮೊದಲು ಮೋಹನ್ ಗೋಪಾಲ್ ದಾಸ್ ಎಂದು ಕರೆಯಲ್ಪಡುತ್ತಿದ್ದ ಮೌನಿ ಬಾಬಾ ಅವರು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ರಚನೆಯನ್ನು ತೆಗೆದುಹಾಕುವ ಕಾರ್ಯ ಸೇವಕರೊಂದಿಗೆ ಕ್ಷೇತ್ರದಲ್ಲಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ತಮಗೂ ರಾಮ ಮಂದಿರ ಉದ್ಘಾಟನೆಯ ಆಹ್ವಾನ ಕಳುಹಿಸುತ್ತಾರೆ ಎಂಬ ಭರವಸೆ ಮತ್ತು ನಂಬಿಕೆ ಇಟ್ಟುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!