ಬೆಳ್ತಂಗಡಿ: ಖ್ಯಾತ ಕ್ರಿಕೆಟಿಗ ಕೆ. ಎಲ್ ರಾಹುಲ್ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಂಜುನಾಥ ಸ್ವಾಮಿ ದರ್ಶನ ಪಡೆದ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಬಳಿಕ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು. ಅಲ್ಲದೆ ಹೆಗ್ಗಡೆ ಕುಟುಂಬಸ್ಥರನ್ನು ಭೇಟಿಯಾಗಿ ಆತ್ಮೀಯವಾಗಿ ಚರ್ಚೆ ನಡೆಸಿದರು. ಈ ವೇಳೆ ಡಾ. ಹೆಗ್ಗಡೆಯವರು ರಾಹುಲ್ ಗೆ ಗೋವಿನ ಕಂಚಿನ ಪ್ರತಿಮೆ ನೀಡಿ, ಶಾಲು ಹೊದಿಸಿ ಬೆಳ್ಳಿ ನಾಣ್ಯ ನೀಡಿ ಗೌರವ ಸಲ್ಲಿಸಿದರು.