newsroomkannada.com

ಶ್ರೀ ಜಟ್ಟಿಗೇಶ್ವರ ಸಮುದಾಯ ಭವನ ಉದ್ಘಾಟನೆ

ಬೈಂದೂರು:ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಣೆಗೆರೆ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದರು ಶ್ರೀ ಜಟ್ಟಿಗೇಶ್ವರ ಸಮುದಾಯ ಭವನವದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.ಸಭಾಭವನದ ನಿರ್ಮಾಣಕ್ಕೆ ಧನಸಾಹಯ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕರ ಸಂಕ್ರಮಣದ ಅಂಗವಾಗಿ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿಯ ವಾರ್ಷಿಕ ಹಾಲು ಹಬ್ಬ ನಡೆಯಿತು.ಅನ್ನದಾನ ಸೇವೆ ಜರುಗಿತು.ಕುಂದಾಪುರ,ಬೈಂದೂರು ತಾಲೂಕು ಸೇರಿದಂತೆ ಇತರ ಜಿಲ್ಲೆಗಳಿಂದ ಭಕ್ತರು ದೈವದ ಮನೆಗೆ ಆಗಮಿಸಿ ಹರಕೆಯನ್ನು ಸಲ್ಲಿಸಿದರು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕರಾವಳಿ ಭಾಗದಲ್ಲಿ ಜಾತಿ ಧರ್ಮ ರಾಜಕೀಯ ಹೆಸರಿನಲ್ಲಿ ಜನರನ್ನು ಒಗ್ಗೂಡಿಸುವುದು ಕಷ್ಟ ಆದರೆ ದೈವ ದೇವಸ್ಥಾನದ ವಿಚಾರದಲ್ಲಿ ಇಲ್ಲಿನ ಜನರು ಒಗ್ಗಟ್ಟಿನಿಂದ ಮುಂದೆ ಸಾಗುತ್ತಾರೆ ಎನ್ನುವುದಕ್ಕೆ ದೈವ ದೇವಸ್ಥಾನಗಳು ಅಭಿವೃದ್ಧಿ ಹೊಂದಿರುವುದೆ ಸಾಕ್ಷಿ ಆಗಿದೆ ಎಂದು ಹೇಳಿದರು.

ಶ್ರೀಜಟ್ಟಿಗೇಶ್ವರ ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದ ಅಧ್ಯಕ್ಷ ಬಾಬು.ಕೆ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ,ದೈವ ಸ್ಥಾನವನ್ನು ನಂಬಿದ ಭಕ್ತರು ಮತ್ತು ದಾನಿಗಳ ಸಹಕಾರದಿಂದ ಅಜೀರ್ಣ ಅವಸ್ಥೆಯಲ್ಲಿದ್ದ ದೈವಸ್ಥಾನದ ಜೀರ್ಣೋದ್ಧಾರ ಸಹಿತ,ಸಭಾಭವನ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.ನಮ್ಮ ದೇವಸ್ಥಾನದಲ್ಲಿ ಸುಮಾರು 35 ದೈವಗಳಿದ್ದು ಪ್ರತಿಯೊಂದು ದೈವದಲ್ಲಿ ಒಂದೊಂದು ರೀತಿ ಶಕ್ತಿ ಅಡಗಿದೆ.ಕಷ್ಟವೆಂದು ಬಂದ ಭಕ್ತರ ಇಷ್ಟಾರ್ಥವನ್ನು ಸಿದ್ಧಿಸುವ ಕಾರಣಿಕ ಶಕ್ತಿಯನ್ನು ನಮ್ಮ ಶ್ರೀಜಟ್ಟಿಗೇಶ್ವರ ಮತ್ತು ಶ್ರೀಭದ್ರಮಹಾಂಕಾಳಿ ಅಮ್ಮನವರ ಶಕ್ತಿ ಅಪಾರವಾದದ್ದು ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆ.ಗೋಪಾಲ ಪೂಜಾರಿ ಹಾಗೂ ವಿದ್ಯಾಧರ ಗುರೂಜಿ ಶಿರಸಿ ಶುಭಹಾರೈಸಿದರು.

ಗುಜ್ಜಾಡಿ ಗ್ರಾ.ಪಂ ಸದಸ್ಯ ಹರೀಶ್ ಮೇಸ್ತ,ಸದಾನಂದ ಪೂಜಾರಿ,ರಾಮ ಪೂಜಾರಿ,ದುಗ್ಗಪ್ಪ ಪೂಜಾರಿ,ಬಿ.ಮಹಾಬಲ ದೇವಾಡಿಗ,ಎಪಿಎಂಸಿ ಸದಸ್ಯ ಕೃಷ್ಣ ಪೂಜಾರಿ,ಎಸ್.ಕೆ ಪೂಜಾರಿ,ಆರತಿ ಪೂಜಾರಿ ಯಡಕಂಠ,ಮಾಧವ ಪೂಜಾರಿ ಬಡಾಕೆರೆ,ಅಚ್ಚುತ ನಾಯಕವಾಡಿ,ಅನಂತ ಖಾರ್ವಿ,ಪ್ರಾತ್ರಿಗಳಾದ ನಾರಾಯಣ ಪೂಜಾರಿ,ಗ್ರಾಮಸ್ಥರು,ದೇವಸ್ಥಾನದ ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಬಾಬು.ಕೆ ಪೂಜಾರಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ದೈಹಿಕ ಶಿಕ್ಷಕ ಗುರುರಾಜ ವಂದಿಸಿದರು.

Exit mobile version